ಹೀಗೊಂದು ನುಡಿಸೇವೆ


ಮೂಡಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಪ್ರತಿಯೊಂದು ವಿಶೇಷವೆ. ಮೋಡ ಕವಿದ ವಾತಾವರಣವಿದ್ದರೂ ಬಿರಿಬಿಸಿಲಿನ ಧಗೆಗೆ ಬಾಯಾರಿ ದಣಿದ ಸಾಹಿತ್ಯ, ಕಲಾಭಿಮಾನಿಗಳಿಗೆ ಈ ಭಾರಿ ನೀರುಣಿಸುವ ಪುಣ್ಯ ಕಾರ್ಯದ ಹೊಣೆ ಹೊತ್ತದ್ದು ನೇತೃತ್ವದ Sಏಈ eಟixeಡಿ Iಟಿಜiಚಿ Pvಣ. ಐಣಜ. ತಂಡ. ವಿದ್ಯಾಗಿರಿ ಆವರಣದ ಜನ ಸೇರುವ ಆಯ್ದ ಮೂರು ಕಡೆಗಳಲ್ಲಿ ಉಚಿತ ನೀರು ಸರಬರಾಜು ಕೇಂದ್ರವನ್ನು ತೆರೆಯುವ ಮೂಲಕ ಸಹಸ್ರಾರು ಜನರ ದಣಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿದಿನವೂ ಸರಾಸರಿ ೩೦೦೦ ಲೀಟರ್‌ಗಳಷ್ಟು ಕೋಲ್ಡ್ ವಾಟರ್, ಹಾಟ್ ವಾಟರ್ ಮತ್ತು ವಾರ್ಮ್ ವಾಟರ್ ನೀರು ವಿತರಿಸಲಾಗುತ್ತಿತ್ತು. ಒಂದೇ ಯಂತ್ರದಲ್ಲಿ ಬಿಸಿ ನೀರು, ಶುದ್ಧ ನೀರು, ತಂಪಾದ ನೀರು ಹೀಗೆ ತ್ರಿವಿಧ ನೀರಿನ ತಂತ್ರ ಪರಿಚಯಿಸಿದ ಕೈಗಾರಿಕೋದ್ಯಮಿ ಎಸ್.ಕೆ.ಎಫ್‌ನ ಜಿ. ರಾಮಕೃಷ್ಣ ಆಚಾರ್ ಅವರ ಈ ಪ್ರಯತ್ನ ಶ್ಲಾಘನಾರ್ಹ.



Read more...

ಕಣ್ಣಿಗೆ ಕಾಣಲಿ, ಕಿವಿಗೆ ಕೇಳಲಿ ಕನ್ನಡ: ನಾಡೋಜ ಡಾ. ಸಿದ್ಧಲಿಂಗಯ್ಯ

ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ' ಆಳ್ವಾಸ್ ನುಡಿಸಿರಿ'ಗೆ ಆ ಕ್ಷಣದ ತೆರೆ
ಮೂಡುಬಿದಿರೆ: ಗಡಿಭಾಗದಲ್ಲಿರುವ ಕನ್ನಡಿಗರಿಗೆ ಕರ್ನಾಟಕ ಸರಕಾರ ಒತ್ತಾಸೆಯಾಗಿರಬೇಕು. ಮಹಾರ್ಜನ್ ವರದಿ ಜಾರಿಮಾಡಿ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿರುವ ಕಾಸರಗೋಡಿನ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂದು ೧೧ನೇ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷ ನಾಡೋಜ ಡಾ. ಸಿದ್ಧಲಿಂಗಯ್ಯ ಆಗ್ರಹಿಸಿದರು
ಅವರು 'ಆಳ್ವಾಸ್ ನುಡಿಸಿರಿ' ನಾಡು ನುಡಿಯ ರಾಷ್ಟೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಕಾಸರಗೋಡಿನ ಜನರಿಗಿರುವ ಕನ್ನಡ ಪ್ರೀತಿ ರಾಜ್ಯದ ರಾಜಧಾನಿಯವರಲ್ಲಿಲ್ಲ. ಎಂದು ಅವರು ವಿಷಾದವಾಡಿದರು.
ಬಂಡಾಯ ಕವಿಯಾಗಿದ್ದವರು ಪ್ರೇಮ ಕವಿತೆಗಳನ್ನು ಬರೆಯುವುದು ತಪ್ಪಲ್ಲ ಎಂಬುದು ನನ್ನ ಭಾವನೆ. ಇಂದು ಬಡವರು ಬಡವರಾಗುತ್ತಲೇ, ಶ್ರೀಮಂತರು ಶ್ರೀಮಂತರಾಗುತ್ತಲೇ ಇರುವುದರಿಂದ ಮತ್ತೆ ಬಂಡಾಯ ಕವಿತೆಗಳು ಮತ್ತೆ ತನ್ನಿಂದ ಹುಟ್ಟಬಹುದು. ಕವಿಯಾದವನು ಬದ್ಧತೆಯನ್ನು ಹೊಂದಿರುವುದು ಅವಶ್ಯ ಎಂದ ಅವರು ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ನಡೆಸುವಾಗ ಆಳ್ವಾಸ್ ನುಡಿಸಿರಿಯ ಪ್ರಶಸ್ತಿ ಪಟ್ಟಿಯನ್ನೊಮ್ಮೆ ಪರಿಶೀಲಿಸುವುದೊಳ್ಳೆಯದು, ರಾಜ್ಯದಲ್ಲಿರುವ ಎಲ್ಲಾ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಿಗೆ ಆಳ್ವಾಸ್ ನುಡಿಸಿರಿ ಮಾದರಿಯಾಗಬೇಕು ಎಂದು ಹೇಳಿದರು,.

ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ಭಾಜನರಾದ ೧೧ ಜನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು,

ಡಾ. ಎಂ. ಮೊಹನ ಆಳ್ವ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯಕ್ರಮದಲ್ಲಿ ಅಂಥ ಬಾಲಕ ಮಣಿಕಂಠ ಸಮ್ಮೇಳನಾಧ್ಯಕ್ಷ ಸಿದ್ಧಲಿಂಗಯ್ಯನವರ ಪರಿಚಯ ಮಾಡಿದುದು ವಿಶೇಷವಾಗಿತ್ತು.
೧೧ನೇ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷರನ್ನು ಗೌರವಿಸಲಾಯಿತು.






















ಸಮಾರೋಪ ಸಮಾರಂಭಕ್ಕೂ ಮುನ್ನ ಅತಿಥಿಗಳನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು,

ಸರ್ವಾಧ್ಯಕ್ಷರ ಸಮಾರೋಪ ಭಾಷಣದ ಹೈಲೆಟ್ಸ್
* ಕರ್ನಾಟಕ ರಾಜ್ಯದ ಎಲ್ಲಾ ನಾಮಫಲಕಗಳಲ್ಲಿ ಕನ್ನಡವನ್ನು ಪ್ರಧಾನ ಭಾಷೆಯಾಗಿ ಕಡ್ಡಾಯಗೊಳಿಸುವ ಕಾನೂನಿಗೆ ಖಾಸಗಿ ಕಂಪೆನಿ ತಡೆಯಾಜ್ಞೆ ತಂದಿದ್ದು ಅದನ್ನು ಸರಕಾರ ಶೀಘ್ರ ಶೀಘ್ರ ತೆರವುಗೊಳಿಸಬೇಕು.
* ಕಣ್ಣಿಗೆ ಕಾಣಲಿ ಕನ್ನಡ, ಕಿವಿಗೆ ಬಿಳಲಿ ಕನ್ನಡ ಘೋಷಣೆಯು ಎಲ್ಲೆಡೆಯೂ ಕೇಳಿ ಬರಲಿ.
* ಇತ್ತಿಚಿಗೆ ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ನಡೆಯುತ್ತಿರುವ ಮರ್ಯಾದಾ ಹತ್ಯೆಗಳನ್ನು, ಹಾಗೆ ಕರೆಯದೇ ಅನಾಗರೀಯ ಹತ್ಯೆ ಎಂದು ಕರೆಯಬೇಕು.
* ಜಾತಿ ಪದ್ಧತಿಯನ್ನು ನಾಶಪಡಿಸಲು ಯುವಜನತೆ ಏಕತೆಯಿಂದ ನಿಲ್ಲಬೇಕಾಗಿದೆ.
* ಅಂತರ್ಜಾತಿ ವಿವಾಹಗಳಿಗೆ ಸೂಕ್ತ ಪ್ರೋತ್ಸಾಹ ಹಾಗೂ ರಕ್ಷಣೆಯನ್ನು ನೀಡಬೇಕು.



Read more...

ಮಲ್ಲಗಂಬದ ಕಸರತ್ತ


ಆಳ್ವಾಸ್ ನುಡಿಸಿರಿಗೆ ಆಗಮಿಸುವ ಕಲಾ, ಸಾಹಿತ್ಯಾಸಕ್ತರಿಗೆ ಮನರಂಜನೆಗೆ ಯಾವುದೇ ರೀತಿಯ ಕೊರತೆ ಬಾರದಂತೆ ವಿದ್ಯಾಗಿರಿ ಆವರಣದ ಮೂಲೆ ಮೂಲೆಯಲ್ಲಿಯೂ ಒಂದಲ್ಲಾ ಒಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವುಗಳಲ್ಲಿ ಒಂದೆಂಬಂತೆ ಧಾರವಾಡ ಜಿಲ್ಲೆಯ ಕಮ್ಮಟವಾಳದ ಜಯಕನಾಟಕ ಮಲ್ಲಗಂಬ ಅಕಾಡೆಮಿಯ ವತಿಯಿಂದ ನುಡಿಸಿರಿಯ ಪ್ರವೇಷದಲ್ಲಿಯೇ ಮೈನವಿರೇಳಿಸುವ ಮಲ್ಲಗಂಭ ಪ್ರದರ್ಶನ ನಿರಂತರವಾಗಿ ನಡೆಯುತ್ತಿದೆ.
ಅಪರ ಉಜಿರೆ

Read more...

ಅಂಧಪೋರ ಮಾಡಲಿದ್ದಾನೆ ನುಡಿಸಿರಿ ಅಧ್ಯಕ್ಷರ ಪರಿಚಯ





ಮೂಡಬಿದಿರೆ:  ವಿಶೇಷತೆಗಳಿಂದಲೇ ಕೂಡಿರುವ ನುಡಿಸಿರಿಯಲ್ಲಿ ಸಮಾರೋಪ ಸಮಾರಂಭದಲ್ಲಿ ಒಂದು ವಿಶೇಷ ಕಾದಿದೆ. ಅದೂ ನಮ್ಮೊಳಗಿನ ಕಣ್ಣನ್ನು ತೆರೆಸುವ ವಿಶೇಷ. ಹೌದು, ಗದಗದ ಜ್ಞಾನಸಿಂಧು ಅಂಧ ಮಕ್ಕಳ ಶಾಲೆಯ ಒಂದನೇ ತರಗತಿಯಲ್ಲಿ ಓದುತ್ತಿರುವ ಪೋರ ಮಣಿಕಂಠ ನುಡಿಸಿರಿಯ ಸರ್ವಾಧ್ಯಕ್ಷ ನಾಡೋಜ ಡಾ| ಸಿದ್ಧಲಿಂಗಯ್ಯ ಅವರ ಪರಿಚಯ ಭಾಷಣ ಮಾಡಲಿದ್ದಾನೆ.
ಅಂಧನಾಗಿರುವ ಮಣಿಕಂಠ ಯೋಗದ ಎಲ್ಲಾ ಆಸನಗಳನ್ನು ಚಕಚಕನೆ ಮಾಡುವಷ್ಟು ಪ್ರವೀಣ, ಗಣಿತದ ಲೆಕ್ಕಗಳನ್ನು, 30ರ ವರೆಗಿನ ಮಗ್ಗಿಯನ್ನು ನೇರ ಮತ್ತು 20ರ ವರೆಗಿನ ಮಗ್ಗಿಯನ್ನು ಉಲ್ಟಾ ಹೇಳುವ ನಿಪುಣ. ಭಾರತದದ ಮೊದಲ ರಾಷ್ಟ್ರಪತಿ ಯಾರು? ಐದನೇ ಪ್ರಧಾನಿ ಯಾರು, ಕರ್ನಾಟಕದ ಮುಖ್ಯಮಂತ್ರಿಗಳು ಯಾರೆಲ್ಲ? ಹೀಗೆ ಕೇಳುವ ಪ್ರಶ್ನೆಗಳಿಗೆ ಕ್ಷಣಮಾತ್ರದಲ್ಲಿ ಉತ್ತರ ಹೇಳಿ ಎಂಥವರನ್ನೂ ಬೆರಗುಗೊಳಿಸುತ್ತಾನೆ.
ಸಂಜೆ ಮಾಧ್ಯಮ ಕೇಂದ್ರಕ್ಕೆ ತನ್ನ ಶಾಲೆಯ ಕಾರ್ಯದರ್ಶಿ ಶಿವಾನಂದ ಅವರೊಂದಿಗೆ ಆಗಮಿಸಿದ ಮಣಿಕಂಠ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ. ಈತನ ಜೊತೆಗಿದ್ದ ಇತರ ಅಂಧಮಕ್ಕಳು ಕೂಡ ಒಂದಿಲ್ಲೊಂದು ಪ್ರತಿಭೆ ಉಳ್ಳವರಾಗಿದ್ದರು. ಪ್ರತಿಭೆಗೆ ಅಂಧತ್ವ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ಮಕ್ಕಳುಗಳೇ ಪ್ರತ್ಯಕ್ಷ ನಿದರ್ಶನ.









Read more...

ವೆಂಕಟೇಶ್ ಅಲಕೋಡರ ಲಘುಸಂಗೀತ

ಮೂಡಬಿದಿರೆ ಆಳ್ವಾಸ್ ಕಾಲೇಜಿನ ಡಾ. ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಆಳ್ವಾಸ್ ನುಡಿಸಿರಿ ೨೦೧೪ರ ಅಂಗವಾಗಿ ವೆಂಕಟೇಶ್ ಅಲಕೋಡ ಮತ್ತು ಬಳಗ ಬೆಂಗಳೂರು ಇವರಿಂದ ಲಘುಸಂಗೀತ ಕಾರ್ಯಕ್ರಮ ನಡೆಯಿತು.
-ಅಪರ ಉಜಿರೆ

Read more...

ಸಮಾಜದ ನೈಜತೆಯನ್ನು ಮಾಧ್ಯಮ ಭಿತ್ತರಿಸುತ್ತಿದೆ: ವಾನಳ್ಳಿ

ಓದುಗ ಮತ್ತು ಪ್ರೇಕ್ಷಕ ಬದಲಾಗದೆ ಮಾಧ್ಯಮಗಳ ವಸ್ತು ಬದಲಾಗುವುದಿಲ್ಲ. ಮಾಧ್ಯಮಗಳು ಬಡಿಸುವ ವಸ್ತು ಬದಲಾಗದೆ ಓದುಗ ಮತ್ತು ವೀಕ್ಷಕ ಬದಲಾಗಲು ಸಾಧ್ಯವಿಲ್ಲ ಎಂದು ಡಾ. ನಿರಂಜನ ವಾನಳ್ಳಿ ಹೇಳಿದರು. ಮಾಧ್ಯಮ- ವರ್ತಮಾನದ ತಲ್ಲಣಗಳು ಕುರಿತಾದ ವಿಶೇಷ ಉಪನ್ಯಾಸ ನೀಡಿದ ವಾನಳ್ಳಿ ಪ್ರತಿಯೋದ್ಯಮ ಯುದ್ಧವಾಗಿ ಪರಿವತಱನೆಯಾಗುತ್ತಿದೆ ಎಂದರು. ವಾನಳ್ಳಿ ಮಂಡಿಸಿದ ಮಂಡನೆಗಳ ಆಯ್ದ ಭಾಗಗಳು ಇಲ್ಲಿದೆ.
*ಮಾಧ್ಯಮ ಅಂದರೆ ಅಭಿವ್ಯಕ್ತಿಯ ಸಾಧನ.
*ಮಾಧ್ಯಮಗಳು ಒಂದಕ್ಕೊಂದು ಪೂರಕ. ಪ್ರತಿಯೊಂದು ಮಾಧ್ಯಮವೂ ಅದರದೇ ಆದಂತಹ ಹಿಂಬಾಲಕರನ್ನ ಪಡೆದುಕೊಂಡಿದೆ. ಒಂದೊಂದು ಕಾಲಕ್ಕೆ ತಕ್ಕಂತೆ ಒಂದು ಮಾಧ್ಯಮ ಪ್ರಸಿದ್ಧಿಯನ್ನು ಪಡೆಯುತ್ತೆ ಆದರೆ ಯಾವುದೇ ಮಾಧ್ಯಮ ಸಾಯೋದಿಲ್ಲ.
*ಕನ್ನಡ ಪತ್ರಿಕೆಗಳ ಬೆಳವಣಿಗೆ ಸಮಾಧಾನಕರವಾಗಿಲ್ಲ, ಇಡೀ ದೇಶದ ಮಟ್ಟಿಗೆ ನೋಡುವುದಾದರೆ ಕನ್ನಡ ಪತ್ರಿಕೆ ೩.೫ ರಷ್ಟು ಓದುಗರನ್ನು ಹೊಂದಿದೆ ಪಕ್ಕದ ಮಲಯಾಳಂ ಶೇಕಡ ೧೦ರಷ್ಟು ಓದುಗರನ್ನು ಹೊಂದಿದೆ ಅನ್ನುವುದು ಗಮನಾರ್ಹ.
* ಪತ್ರಕರ್ತರಿಗೆ ಕಾಡುವ ಅಭದ್ರತೆಗೆ ಹಣದಹಿಂದೆ ಬಿದ್ದಿರುವ ಮಾಧ್ಯಮ ನೀತಿಯೂ ಕಾರಣ.
*ಹೆತ್ತವರು ತಮ್ಮ ಮಕ್ಕಳನ್ನು ಪತ್ರಿಕೋದ್ಯಮಕ್ಕೆ ಸೇರಿಸುವಾಗ ನಂಗೆ ಪಾಪ ಪ್ರಜ್ಙೆ ಕಾಡುತ್ತದೆ
.ಯಾಕೆಂದರೆ ನೆಮ್ಮದಿಯ ಜೀವನವನ್ನು ಕೊಡುವ ಮಾಧ್ಯಮವಾಗಿ ಪಾತ್ರಿಕೋದ್ಯಮ ಉಳಿದಿಲ್ಲ.
* ಪತ್ರಿಕೋದ್ಯಮದ ಒಳಹೊಕ್ಕವರು ಐದಾರು ವರುಷಕ್ಕೆ ಅದನ್ನು ತೊರೆದ ಬೇರೆ ದಾರಿ ನೋಡುವವರ ಸಂಖ್ಯೆ ಏರುತ್ತಿದೆ.
* ಇಡೀ ಮಾಧ್ಯಮ ಕೆಟ್ಟಿದೆ ಅಂತ geಟಿeಡಿಚಿಟise ಮಾಡೋದು ತಪ್ಪು. ಇವತ್ತಿಗೂ ದೇಶದ ವ್ಯವಸ್ಥೆ ಉಳಿದಿದೆ ಅಂದರೆ ಅದಕ್ಕೆ ಕಾರಣ ಮಾಧ್ಯಮ. ಮುಖ್ಯವಾಹಿನಿಯ ಮಾಧ್ಯಮಗಳು ದೇಶದ ವ್ಯವಸ್ಥೆಯಲ್ಲಿ ಇವತ್ತಿಗೂ ಬಹಳ ಮುಖ್ಯ ಅನಿಸಿದೆ ಈ ರೀತಿಯಲ್ಲಿ ಮಾಧ್ಯಮದ ಪಾತ್ರ ಅಭಿನಂದನಾರ್ಹ
*ಸ್ಥಳೀಯ ಪತ್ರಿಕೋದ್ಯಮಕ್ಕೆ ಇಂದಿನ ದಿನ ಪ್ರಾಮುಖ್ಯತೆ ಸಿಕ್ಕಿದೆ. ಿದೊಂದು ಒಳ್ಳೆಯ ಬೆಳವಣಿಗೆ.
*ಮಾಧ್ಯಮಕ್ಕೆ ಬರುತ್ತಿರುವ ಹೊಸಬರಿಂದ ಭಾಷೆಗೆ ಮಾರಕತೆ ಎದುರಾಗಿದೆ. ಅವರ ಭಾಷಾ ಜ್ಙಾನದ ಮಟ್ಟ ಬಹಳ ಕೆಟ್ಟದ್ದು. ಇದರಿಂದ ಭಾಷಾ ತಲ್ಲಣ ಶುರುವಾಗಿದೆ. ಹೆಚ್ಚಾಗಿರುವ ಸ್ಪರ್ಧೆಯೂ ಟೆಲಿವಿಷನ್ ಮೀಡಿಯಾವೂ ಆತಂಕಕಾರಿಯಾಗಿ ಬೆಳೆದಿದೆ.
* ಪತ್ರಿಕೋದ್ಯಮ ಇಂದು ಯುದ್ಧ ಕ್ಷೇತ್ರವಾಗಿ.., ಸಂಭ್ರಮ ಕೇಂದ್ರವಾಗಿ ಬದಲಾಗಿದೆ.
* ಮಾಧ್ಯಮ ಫ್ಯಾಷನ್ ಅಗ್ತಿದೆ ಪ್ಯಾಷನ್ ಆಗಿ ಉಳಿದಿಲ್ಲ
* ಪತ್ರಕರ್ತರಿಗೆ ಪತ್ರಿಕೋಧ್ಯಮ ಜೀವನದ ಧರ್ಮವಾಗಬೇಕು.
* ಮಾಧ್ಯಮವೊಂದು ಸಮಾಜ ಸುಂದರಗೊಳ್ಳಲಿ ಆಗ ಕನ್ನಡಿಯಂತಿರುವ ಮಾಧ್ಯಮ ಸುಂದರವಾಗುತ್ತೆ.

- ಸುದಿನ ಕೃಪೆ
Read more...

ನುಡಿಸಿರಿ ಕೊಠಡಿ ಸಂಖ್ಯೆ ೩೦೬ರ ರಹಸ್ಯ


ಆಳ್ವಾಸ್ ನುಡಿಸಿರಿ ೨೦೧೪ರ ಅಂಗವಾಗಿ ಕಾಲೇಜಿನ ಸೈನ್ಸ್ ಬ್ಲಾಕ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರದರ್ಶನ ಮತ್ತು ಮಾರಾಟ ಮಳಿಗೆಯ ಗೋಡೆಗಳಲ್ಲಿ '೩ನೇ ಮಹಡಿಯಲ್ಲಿ ಕೊಠಡಿ ೩೦೬ ಇದರಲ್ಲಿ ಏನೋ ವಿಶೇಷವಿದೆ ನೋಡದೆ ಹೋದಲ್ಲಿ ನಿರಾಶರಾಗುತ್ತೀರಿ' ಎಂಬ ಭಿತ್ತಿಪತ್ರಗಳು ಕಾಣಸಿಗುತ್ತವೆ. ಹಾಗಾದರೆ ಆ ಕೊಠಡಿಯ ವಿಶೇಷ ಏನದು? ಇಲ್ಲಿದೆ ನೋಡಿ.
ಕೊಠಡಿ ಸಂಖ್ಯೆ ೩೦೬ರಲ್ಲಿ ಇರುವುದು ಉಡುಪಿ ಶಿರ್ವ ಮೂಲದ ಹಿರಿಯ ಚಿತ್ರಕಲಾವಿದ ಜಿ. ಆರ್. ಉಪಾಧ್ಯಾಯರ ವಿಭಿನ್ನ ಶೈಲಿಯ ಚಿತ್ರಕಲಾ ಪ್ರದರ್ಶನ. ಅಂದರೆ ಒಂದು ನಿರ್ದಿಷ್ಟ ಚಿತ್ರದೊಳಗಡೆ ಹಲವು ಚಿತ್ರಗಳನ್ನು ಮೂಡಿಸುವಿಕೆ. ಇದನ್ನು ನಾವು ಏಕಾಗ್ರತೆ ತೆಯಿಂದ ದಿಟ್ಟಿಸಿದಾಗ ಮಾತ್ರ ಕಾಣಸಿಗುತ್ತದೆ. ಶಿರ್ವದ ಕ್ಲೇ ಮಾಡೆಲ್ ಕಲಾವಿದ ಎಸ್.ಎಂ. ರಾಮ ಉಪಾದ್ಯಾಯ ಮತ್ತು ಕೃಷ್ಣವೇಣಿ ದಂಪತಿಗಳ ಪುತ್ರರಾಗಿರುವ ಇವರು, ತಂದೆಯವರು ಮಣ್ಣಿನ ಮೂರ್ತಿಗಳನ್ನು ರಚಿಸುತ್ತಿದ್ದುದನ್ನು ನೋಡಿ ಚಿತ್ರಕಲೆಚಿi ಬಗ್ಗೆ ಆಸಕ್ತಿ ಮೂಡಿಸಿಕೊಂಡರು. ಆದರೆ ತಂದೆಯವರಿಂದ ಇದಕ್ಕೆ ಸೂಕ್ತ ಪ್ರೋತ್ಸಾಹ ದೊರಕಲಿಲ್ಲ. ಆ ಸಂದರ್ಭ ದಾರವಾಢದ ಹೋಟೇಲೊಂದರಲ್ಲಿ ಕೆಲಸಕ್ಕೆ ಸೇರಿ ಜೊತೆಜೊತೆಗೆ ಚಿತ್ರಕಲಾ ಶಿಕ್ಷಣವನ್ನೂ ಆರಂಭಿಸಿದರು. ಅಷ್ಟು ಮಾತ್ರವಲ್ಲದೇ ದ್ವಿತೀಯ ರ್‍ಯಾಂಕನ್ನು ಪಡೆಯುವಲ್ಲಿಯೂ ಯಶಸ್ವಿಯಾದರು. ಇದರೊಂದಿಗೆ ತಮ್ಮ ಗುರುಗಳಾದ ಸಚ್ಚಿದಾನಂದ ಆಚಾರ್ಯರನ್ನು ಇಂದಿಗೂ ನೆನೆಯುತ್ತಾರೆ.
ಸದ್ಯ ವಿಶ್ರಾಂತ ಜೀವನವನ್ನು ನಡೆಸುತ್ತಿರುವ ಉಪಾಧ್ಯಾಯರು ಸಾಗರದಲ್ಲಿ ಮೂರು ವರ್ಷ, ಪಳಿಮ್ಮಾರಿನಲ್ಲಿ ಹದಿಮೂರು ವರ್ಷ ಹಾಗೂ ಬಲ್ಮಠದಲ್ಲಿ ಹದಿನೇಳು ವರ್ಷ ಚಿತ್ರಕಲಾ ಅದ್ಯಾಪಕರಾಗಿ, ಬೆಂಗಳೂರು ಆಯುಕ್ತರ ಕಛೇರಿಯಲ್ಲಿ ಚಿತ್ರಕಲಾ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ತಮ್ಮ ಕಲಾಕೃತಿಗಳ ಛಾಯಾಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಿರುವ ಇವರು ೬೦ ಕಲಾಕೃತಿಗಳ ಮೂಲ ಪ್ರತಿಗಳನ್ನು ತಮ್ಮ ೬೦ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ನೀಡಿರುತ್ತಾರೆ.
ಜನ ಸೇರುವಲ್ಲಿಗೆ ತಮ್ಮ ಚಿತ್ರಕಲಾಕೃತಿಗಳನ್ನು ಕೊಂಡೊಯ್ಯುವ ಉಪಾದ್ಯಾಯರು ಎಂದಿಗೂ ವ್ಯಾಪಾರ ಮನೋಭಾವದಿಂದ ಚಿಂತಿಸುವ ಬದಲಾಗಿ ಕಲಾಸಕ್ತರಿಗೆ ಚಿತ್ರಕಲೆಯೊಂದನ್ನು ಸೂಕ್ಷ್ಮವಾಗಿ ಗಮನಿಸುವಂತೆ ಪ್ರೇರೇಪಿಸುತ್ತಾರೆ. 'ಹೀಗೆ ಮಾಡುವುದರಿಂದ ಸನ್ಣ ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡುವುದಲ್ಲದೆ ಕೆಲವೊಮ್ಮೆ ಅವರ ಬದುಕಿನಲ್ಲಿ ಅದೇ ಹಾದಿಯಲ್ಲಿ ಮುಂದುವರಿಯಲು ಸಹಕರಿಸಲೂ ಬಹುದು' ಎನ್ನುತ್ತಾರೆ ೬೭ರ ಹರೆಯದ ಉಪಾದ್ಯಾಯರು. ಇವರ ಕಲಾಕೃತಿಗಳನ್ನು ಉ. ಖ. Uಠಿಚಿಜhಥಿಚಿಥಿಚಿ ಎಂದು ಟೈಪಿಸಿದರೆ  ಥಿou ಣubeನಲ್ಲಿಯೂ ವೀಕ್ಷಿಸಬಹುದಾಗಿದೆ.  ಅಲ್ಲದೆ ಇದು ಸಿಡಿ ರೂಪದಲ್ಲೂ ಲಭ್ಯವಿದೆ. ಸಂಪರ್ಕಕ್ಕೆ ೯೪೮೦೬೦೦೯೧೦
  
-ಅಪರ ಉಜಿರೆ

Read more...

ಭಾರತೀಯರು ಯೂರೋಪ್ ಸಂಸ್ಸೃತಿಯನ್ನು ಅನುಸರಿಸಬೇಕಿತ್ತು : ನಟರಾಜ್ ಹುಳಿಯಾರ್

ಭಾರತೀಯರು ಯೂರೋಪ್‌ನ ಸಂಸ್ಸೃತಿಯನ್ನು ಅನುಸರಿಸಬೇಕಾಗಿತ್ತು ಆದರೆ ನಾವು ಅಮೇರಿಕಾದ ಬಂಡವಾಳಶಾಹಿ ಸಂಸ್ಸೃತಿಯನ್ನು ಅನುಸರಿಸಿದ್ದರಿಂದಾಗಿ ಇಂದು ಕೆಲ ಮೌಲ್ಯಗಳನ್ನು ಕಳೆದುಕೊಂಡು ಯಾಂತ್ರಿಕ ಬದುಕನ್ನು ನಡೆಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೆಂಗಳೂರು ವಿವಿಯ ಪ್ರಾಧ್ಯಾಪಕ ಡಾ. ನಟರಾಜ ಹುಳಿಯಾರ್ ಅಭಿಪ್ರಾಯಪಟ್ಟರು. ಅವರು ಆಳ್ವಾಸ್ ನುಡಿಸಿರಿಯ ಎರಡನೇ ದಿನದ ಕಾರ್ಯಕ್ರಮದಲ್ಲಿ 'ಸಂಸ್ಕೃತಿ : ವರ್ತಮಾನದ ತಲ್ಲಣಗಳು' ಎಂಬ ವಿಷಯ ಕುರಿತಾಗಿ ಮಾತನಾಡುತ್ತಿದ್ದರು.
ಕರ್ನಾಟಕವು ಬಹುತ್ವ ಸಂಸ್ಕೃತಿಯ ನಾಡಾಗಿದ್ದರೂ ಕೂಡ ಇತತೀಚಿನ ದಿನಗಳಲ್ಲಿ ಅದಕ್ಕೆ ದಕ್ಕೆ ತರುವಂತಹ ಚಟುವಟಿಕೆಗಳು ಜೋರಾಗುತ್ತಿವೆ ಎಂಬುದಾಗಿ ಆತಂಕ ವ್ಯಕ್ತಪಡಿಸಿದರು. ಇದನ್ನು ತಪ್ಪಿಸಲು ಅದನ್ನು ನಿರಂತರವಾಗಿ ಮರಳಿ ಕಟ್ಟಬೇಕಾದ ಕೆಲಸ ಅನಿವಾರ್ಯವಾಗಿ ಆಗಬೇಕಾಗಿದ್ದು ಈ ಮೂಲಕ ಕನ್ನಡವು ಬೆಳೆಸಿಕೊಂಡು ಬಂದಿರುವ ಜಾಗತಿಕ ಜಾತ್ಯಾತಿತ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದರು. 
ಇಂದು ನಾವು ಯಾವುದನ್ನು ಜನಪ್ರಿಯ ಸಂಸ್ಕೃತಿ ಎಂಬುದಾಗಿ ಕರೆಯುತ್ತೇವೆಯೋ ಅದು ನಿಜವಾಗಿ ಜನವಿರೋಧಿ ಸಂಸ್ಕೃತಿಯಾಗಿದೆ. ಸರ್ವ ಮತ ಧರ್ಮಗಳನ್ನು ಒಗ್ಗೂಡಿಸುವ ಕಾರ್ತ ತುರ್ತಾಗಿ ಆಗಬೇಕಾಗಿದೆ. ಇದಕ್ಕೆ ಸಾಹಿತ್ಯ ನೆರವಾಗುತ್ತದೆ. ಯಾಕೆಂದರೆ ಸಾಹಿತ್ಯದಿಂದ ನವ ವೈಚಾರಿಕಥೆ ಹುಟ್ಟುತ್ತದೆ. ಈ ಸಂಸ್ಕೃತಿಯನ್ನು ನಮ್ಮ ಮಕ್ಕಳಲ್ಲಿ ಮೈಗೂಡಿಸುವ ಮೂಲಕ ಬೂಟಾಟಿಕೆಯ ಸಂಸ್ಕೃತಿಯನ್ನು ಉಚ್ಚಾಟಿಸಬೇಕಾಗಿದೆ ಎಂದು ಕರೆ ನುಡಿದರು.

-ಅಪರ ಉಜಿರೆ

Read more...